ತೀರ್ಥಹಳ್ಳಿ ಕಟ್ಟಹಕ್ಲು ಬಳಿ ರಸ್ತೆ ಅಪಘಾತ-ಶಿಕ್ಷಕ ಸಾವು

ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಬಳಿ ಓಮಿನಿ ಮತ್ತು ಬೈಕ್ ನಡುವೆ ಡಿಕ್ಕಿ ಉಂಟಾಗಿದ್ದು, ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇವರನ್ನ ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿ ಬರುತ್ತಿದ್ದಾಗ, ತಿರುವಿನಲ್ಲಿ ಒಮಿನಿಗೆ ಗುದ್ದಿದ ಪರಿಣಾಮ ವೆಂಕಟೇಶ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಅವರಿಗೆ 51 ವರ್ಷ ಎಂದು ಗುರುತಿಸಲಾಗಿದೆ.
ಶಾಲೆಯ ಕೆಲಸದ ಸಲುವಾಗಿಯೇ ಬೈಕ್ ನಲ್ಲಿ ಹೋಗುತ್ತಿದ್ದಾಗ ವೆಂಕಟೇಶ್ ಗೆ ತಿರುವಿನ ಬಳಿ ಅತಿ ವೇಗದಲ್ಲಿದ್ದ ಒಮಿನಿಗೆ ಡಿಕ್ಕಿ ಹೊಡೆದಿದ್ದಾರೆ. ಕೊಪ್ಪ ತಾಲ್ಲೂಕಿನ ಬೊಮ್ಲಾಪುರದವರಾದ ವೆಂಕಟೇಶ್ ಈ ವರ್ಷ ಮುಂಬಡ್ತಿ ಪಡೆದು ಹೆಡ್ಮಾಸ್ಟರ್ ಆಗಿ ಕಟ್ಲೆ ಹಕ್ಲು ಶಾಲೆಗೆ ವರ್ಗಾವಣೆಗೊಂಡಿದ್ದರು.
ಸುತ್ತಮುತ್ತ ಉತ್ತಮ ಮೇಷ್ಟ್ರು ಎಂದು ಹೆಸರು ಮಾಡಿದ್ದ ಅವರ ನಿಧನಕ್ಕೆ ಸ್ತಳೀಯರು ಕಂಬನಿ ಮಿಡಿದಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

